Posts

Showing posts from September, 2022

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ಹುಲು ಮಾನವ

Image
ಹುಲು ಮಾನವ **************************************** ©All Rights reserved by  Myunsungpoetry.blogspot.com Ref no :- MUP/25092022/21 **************************************** ಅ ದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿಗೇಳುವುದು ಎಲೆಮಾನವ!!! ಅದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿ...