Posts

Showing posts from August, 2022

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....

Image
ಮರಳಿಬಾರದ.....     ಮನ ಅಳಿಸದ   ಸುಂದರ ಸವಿ ನೆನಪುಗಳು.... **************************************** ©All Rights reserved by  Myunsungpoetry.blogspot.com Ref no :- MUP/09082022/19 **************************************** ಹು ಣ್ಣಿಮೆಯ ರಾತ್ರಿಯಲಿ  ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ  ಮನಃಶಾಂತಿ ತುಂಬಿದ ಹೃದಯ  ವೇದನೆ ಅರಿಯದ ಚಿತ್ತ  ತೊದಲ ನುಡಿಗಳು  ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ  ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು..... ಅಮ್ಮನು ಆಡಿದ ಜೋಗುಳ  ಅಪ್ಪನ ಹೆಗಲೇರಿದ ಆ ದಿನಗಳ ಬಾನಿನಲ್ಲಿ ಚಂದಮಾಮನ ಕಂಡು ಸವಿ ಮಾತಿಗಾಗಿ ಕಾತುರ  ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ  ತಾರೆಗಳ ಎಣಿಸುವ ಸಡಗರ ಎಣಿಸಲಾಗದೆ ಓಡಿ ಸರಸರ  ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ  ಗಾನದಂತೆ ಇಂದಿಗೂ ಸುಮಧುರ  ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು..... ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ  ನೆನಪಲ್ಲೇ ನೆನಪನ್ನು ಮುದ್ದಿಸಿ ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು  ಮರಳಿಬಾರದ,,, ಮನ ಅಳಿಸದ,, ಸುಂದರ ಸವಿ ನೆನಪುಗಳು  ಮಂದಹಾಸ ಹ...

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ನೆಚ್ಚಿನ ಗುರು

Image
  ನೆಚ್ಚಿನ ಗುರು **************************************** ಅ ರಿವೇ ಗುರುವೆನ್ನುವರು ಗುರುವಿಲ್ಲದೆ ಅರಿವು ಸಾಧ್ಯವೇ? ನನ್ನ ನೆಚ್ಚಿನ ಗುರುವು ದೈವವೇ ಸರಿ  ಅದಕ್ಕೆ ಇರಬೇಕು ನೋಡಿದೊಡನೆ ವಿನಮ್ರಳಾಗಿ ನಿಲ್ಲುವೆ! ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದೊಯ್ಯುವ ಗುರುವೆ ನನ್ನ ಅರಿವು! ಚಿರವಾಗಲಿ ನನ್ನ ಗುರುವಿನ ಕಾಯಕ  ಅಪೇಕ್ಷೆಯಿಲ್ಲದ ನಿಸ್ವಾರ್ಥ ಪಾಠವು! ಕಾಣಸಿಗುವುದೇ ಹುಲು ಮಾನವನಿಗೆ ತ್ರಿಮೂರ್ತಿಗಳ ದರ್ಶನ! ಹೀಗಾಗಿಯೇ ಹೇಳಿರಬೇಕು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಹ!  ಗುರುವಿಗೆ ಗುಲಾಮನಾಗುವವರೆಗೂ ಸಿಗಲಾರದಯ್ಯ ಮುಕುತಿ! ಎಂದಿಗೂ ಶಾಶ್ವತ ನಿನ್ನ ಮೇಲಿನ ಭಕುತಿ ಜ್ಞಾನದ ಕಣಜವೇ ನೀನು ನನ್ನಯ ಪಾಲಿಗೆ ನೀನೆ ಕಾಮಧೇನು!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇