Posts

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ಹುಲು ಮಾನವ

Image
ಹುಲು ಮಾನವ **************************************** ©All Rights reserved by  Myunsungpoetry.blogspot.com Ref no :- MUP/25092022/21 **************************************** ಅ ದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿಗೇಳುವುದು ಎಲೆಮಾನವ!!! ಅದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿ...

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....

Image
ಮರಳಿಬಾರದ.....     ಮನ ಅಳಿಸದ   ಸುಂದರ ಸವಿ ನೆನಪುಗಳು.... **************************************** ©All Rights reserved by  Myunsungpoetry.blogspot.com Ref no :- MUP/09082022/19 **************************************** ಹು ಣ್ಣಿಮೆಯ ರಾತ್ರಿಯಲಿ  ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ  ಮನಃಶಾಂತಿ ತುಂಬಿದ ಹೃದಯ  ವೇದನೆ ಅರಿಯದ ಚಿತ್ತ  ತೊದಲ ನುಡಿಗಳು  ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ  ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು..... ಅಮ್ಮನು ಆಡಿದ ಜೋಗುಳ  ಅಪ್ಪನ ಹೆಗಲೇರಿದ ಆ ದಿನಗಳ ಬಾನಿನಲ್ಲಿ ಚಂದಮಾಮನ ಕಂಡು ಸವಿ ಮಾತಿಗಾಗಿ ಕಾತುರ  ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ  ತಾರೆಗಳ ಎಣಿಸುವ ಸಡಗರ ಎಣಿಸಲಾಗದೆ ಓಡಿ ಸರಸರ  ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ  ಗಾನದಂತೆ ಇಂದಿಗೂ ಸುಮಧುರ  ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು..... ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ  ನೆನಪಲ್ಲೇ ನೆನಪನ್ನು ಮುದ್ದಿಸಿ ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು  ಮರಳಿಬಾರದ,,, ಮನ ಅಳಿಸದ,, ಸುಂದರ ಸವಿ ನೆನಪುಗಳು  ಮಂದಹಾಸ ಹ...

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ನೆಚ್ಚಿನ ಗುರು

Image
  ನೆಚ್ಚಿನ ಗುರು **************************************** ಅ ರಿವೇ ಗುರುವೆನ್ನುವರು ಗುರುವಿಲ್ಲದೆ ಅರಿವು ಸಾಧ್ಯವೇ? ನನ್ನ ನೆಚ್ಚಿನ ಗುರುವು ದೈವವೇ ಸರಿ  ಅದಕ್ಕೆ ಇರಬೇಕು ನೋಡಿದೊಡನೆ ವಿನಮ್ರಳಾಗಿ ನಿಲ್ಲುವೆ! ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದೊಯ್ಯುವ ಗುರುವೆ ನನ್ನ ಅರಿವು! ಚಿರವಾಗಲಿ ನನ್ನ ಗುರುವಿನ ಕಾಯಕ  ಅಪೇಕ್ಷೆಯಿಲ್ಲದ ನಿಸ್ವಾರ್ಥ ಪಾಠವು! ಕಾಣಸಿಗುವುದೇ ಹುಲು ಮಾನವನಿಗೆ ತ್ರಿಮೂರ್ತಿಗಳ ದರ್ಶನ! ಹೀಗಾಗಿಯೇ ಹೇಳಿರಬೇಕು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಹ!  ಗುರುವಿಗೆ ಗುಲಾಮನಾಗುವವರೆಗೂ ಸಿಗಲಾರದಯ್ಯ ಮುಕುತಿ! ಎಂದಿಗೂ ಶಾಶ್ವತ ನಿನ್ನ ಮೇಲಿನ ಭಕುತಿ ಜ್ಞಾನದ ಕಣಜವೇ ನೀನು ನನ್ನಯ ಪಾಲಿಗೆ ನೀನೆ ಕಾಮಧೇನು!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಅತೃಪ್ತ ಅಬಲೆಯ ಜೀವನ..!

Image
  ಅತೃಪ್ತ ಅಬಲೆಯ ಜೀವನ..! ****************************************** ಅ ರಿಯದ ವಯಸಲಿ ಮದುವೆಯ ದಿಬ್ಬಣ... ಬಹುಬೇಗ  ಬಂದಿತೆ     ನೋವಿನ ಕಂಕಣ ... ಕನಸೇ ಇಲ್ಲದ ನಿನ್ನ ಬರಿದಾದ ಜೀವನ... ಹುಸಿಯಾಯಿತು ನಿನ್ನ ಹಸಿರಿನ ಪಯಣ!!! ಹಗಲಿರುಳು ದುಡಿವೆ ನೀ  ಮನೆಯಾಕಿಯಂತೆ.... ಹೆಸರಿಗಷ್ಟೇ ಒಡತಿ, ಉಳಿಯುದೇನಿಲ್ಲ ಮತ್ತೆ... ಸಿಲುಕಿರುವೆ ನೀ ಬಂಧನಗಳ ಜೊತೆ... ಉಳಿಯುದಾದರೊಂದೆ ಅದುವೆ ಚಿಂತೆ!!! ಹಿಂದೆಂದೂ ಕಂಡಿರದ ಹಿಂಸಿಸುವ ಜನಗಳನೊಳಗೂಡಿ... ಸೋಲುವೆ ನೀನು ಸಮಸ್ಯೆಗಳ ಬಡಿದಾಡಿ... ನಿಲ್ಲದು ಈ ನಿನ್ನ ಒಬ್ಬಂಟಿಯ ಗಾಡಿ... ನಿನ್ನವರಂತಿದ್ದರೂ ನಿನ್ನವರಲ್ಲ ನೀನೆ ಹೊರಬೇಕು ಬಾಳಿನ ಬಂಡಿ!!! ಮುಗಿಯದು ನಿನ್ನ ಕಷ್ಟಗಳ ಪಯಣ... ಬರುವವರೆಗೂ ಮುಕ್ತಿಯ ಆಗಮನ... ಅನಿಸಿರಬೇಕು ನಿನದು ಅತೃಪ್ತ ಜೀವನ... ಇರಬಹುದು ಇದಕ್ಕೆಲ್ಲಾ ವಿಧಿಯೇ ಕಾರಣ!!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮನ ಬರಡಾಗಿ ಬೆತ್ತಲಾಗಿದೆ.!

Image
  ಮನ ಬರಡಾಗಿ ಬೆತ್ತಲಾಗಿದೆ.! * ***************************************** ಭಾ ವನೆಗಳ ಜೊತೆಗೂಡಿ.. ಪ್ರಕೃತಿಯೊಡನೆ ನಲಿದಾಡಿ.. ಚಂದಿರನೊಡನೆ ಮುದ್ದಾಡಿ ನೂರಾರು ಪದಗಳ ಕುಡಿ-ಕುಡಿ ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ...! ಸುರಿವ ಮಳೆಯೊಡನೆ ಕುಣಿದಾಡಿ.. ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ.. ತೀರದ ಸಮುದ್ರದಲೆಯಲಿ ತೆಲಾಡಿ.. ಪದಗಳಲೆ ಸರಸವಾಡುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ..! ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ.. ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ.. ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ... ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ.. ಬರಡಾಗಿ ಬೆತ್ತಲಾಗಿದೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇