Posts

Showing posts with the label New Kannada poetries

ನೀ ಮುಡಿದ ಮಲ್ಲಿಗೆ..!

Image
  ನೀ ಮುಡಿದ ಮಲ್ಲಿಗೆ..! ©All Rights reserved by  Myunsungpoetry.blogspot.com Ref no :- MUP/24122022/28 *************************************** ಬೋ ರ್ಗರೆವ ಆ ತೀರದ ಕಡೆಗೆ, ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ, ಏಕಾಂತದಿ ಚಂದಿರನಿರುವ ಮುಗಿಲಿಗೆ, ನಿನ್ನ ಕರೆದೋಗುವಾಸೆ ಈ ಮನಸಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ಒಂಟಿತನದಿ ಮುಳಿಗಿದ್ದೀ ಬಾಳಿಗೆ, ಜೊತೆಯಾಗುವೆಯೆಂದು ಈ ತೊಳಿಗೆ, ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ, ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ, ನೀ ನುಡಿದ ಪದಗಳೆ ಮೆಟ್ಟಿಲುಗಳು ಈ  ಸಾಲಿಗೆ, ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ, ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ, ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..? ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಓ ಮನದ ರಾಜನೇ..!

Image
ಓ ಮನದ ರಾಜನೇ..! ©All Rights reserved by  Myunsungpoetry.blogspot.com Ref no :- MUP/08122022/27 **************************************** ಮೆ ಲ್ಲನೆ ಸೂರ್ಯ ಮರೆಯಾಗಿರಲು ಹರುಷದಲ್ಲಿ ಚಂದ್ರ ತೇಲಿ ಬರುತಿರಲು ನಿನ್ನ ನೆನಪು ಮನದಲ್ಲಿ ಮಂದಹಾಸ ತಂದಿರಲು  ನಿನ್ನನ್ನು ಹೃದಯದ ಗೋಪುರದಲ್ಲಿ ಪೂಜಿಸಿ ಆರಾಧಿಸುತ್ತಿರುವೆ  ನಲ್ಮೆಯ ನಲ್ಲನೆ  ಕಾಡುತಿರುವೆ ನೀ ಏಕೆ ಕನಸಲೇ ಬಂದು  ಈ ಕಣ್ಣುಗಳಿಗೆ ದರುಶನ ನೀಡುವೆಯ ಪ್ರೀತಿಯ ದಾರಿ ತೋರುವೆಯಾ ಈ ಒಂಟಿತನದ ಪಯಣಕ್ಕೆ  ಸಾಗುವೆ ಜೊತೆ ಜೊತೆಯಲ್ಲೇ ಓ ಮನದ ರಾಜನೇ ನಿಷ್ಕಲ್ಮಶ ಮನಸ್ಸಿನ ಒಡೆಯನೇ  ಕನಸಲೇ ಬಂದು ಕನಸಲ್ಲೇ ಆಗುವೆ ಮಾಯ ಹೇ ಪ್ರಿಯ ಸಖನೇ  ಜೀವ ತುಂಬುವೆಯ  ಈ ಕಲ್ಪನೆಯ ಪ್ರೀತಿಗೆ  ನಗುತಲೆ ಕೇಳುವೆ ನಾ ನೀ ಯಾರೆಂದು ತಿಳಿಸುವೆಯಾ ? ನನ್ನೀ ಮುಗ್ದ ಮನಸ್ಸಿಗೆ ಒಮ್ಮೆ ತಿಳಿಸಿದರೆ  ನೀ ಬರುವ ದಾರಿಯಲ್ಲಿ  ಪ್ರೀತಿಯ ಹೂಗಳ ಚೆಲ್ಲಿ  ಸ್ವಾಗತಿಸುವೆ ನನ್ನೀ ಹೃದಯದ ಅರಮನೆಗೆ....🥰 Anu ....✍🏻❣️ Bengaluru. **************************************** I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 #Myunsungpoetry.blogspot.com# 𝙸?...

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

Image
ಮಾಯದಲ್ಲಿ ಮಾಸುಹೋಗಿದೆ ಮನಸ್ಸು ©All Rights reserved by  Myunsungpoetry.blogspot.com Ref no :- MUP/30112022/26 *************************************** ಬಾ ಣದಂತ ಸಮಯದ ನಡು ಸಿಲುಕಿ.. ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ.. ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಕಟಿಕರ ಕುಟೀರದಲ್ಲಿ ಸೇರಿ.. ಕಾಮಕ್ರೋಧದ ಬಲೆಯಲ್ಲಿ ತೂರಿ.. ಮೂಢನಂಬಿಕೆಯ ಜಾಲದಲ್ಲಿ ಜಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ.. ಪ್ರೇಮಲೋಕವ ದಿನವು ನೆನೆದು ನೂರು ಬಾರಿ.. ಮರೆತು ತನ್ನ ಜೀವನದ ಸಾಧನೆಯ ದಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಆದರೂ ಎಲ್ಲೋ.......... ಭರವಸೆಯ ಕಿರಣ ಮನಸಲಿ ತೂರಿ.. ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ.. ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ.. ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!. ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 ...

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ಹುಲು ಮಾನವ

Image
ಹುಲು ಮಾನವ **************************************** ©All Rights reserved by  Myunsungpoetry.blogspot.com Ref no :- MUP/25092022/21 **************************************** ಅ ದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿಗೇಳುವುದು ಎಲೆಮಾನವ!!! ಅದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿ...

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಆಲಿಸು ನನ್ನಯ ಹುಚ್ಚುಗವನ...!

Image
ಆಲಿಸು ನನ್ನಯ ಹುಚ್ಚುಗವನ... ******************************************** ಪ್ರೀತಿ ಎಂದೊಡನೆ ನೆನೆಯುವೆ ನಿನ್ನ, ನೆನೆದೊಡನೆ ಮನಕೆ ಖುಷಿಯ ದಿಬ್ಬಣ... ಅರಿಯದೆ ಜಪಿಸುವೆ  ನಿನ್ನ ಹೆಸರನ್ನ, ಆ ಕನವರಿಕೆಗೆ ಕೊಡು ಒಂದು ವ್ಯಾಖ್ಯಾನ... ನಿನ್ನ ನೋಡಲು ನಾಚುವವು ನಯನ, ಉಳಿಯಲು ಸಾಧ್ಯವೇ ಇರದೆ ನಿನ್ನೆಡೆಗೆ ಗಮನ... ಊಹೆಗು ಮೀರಿದೆ ನನ್ನ ಕನಸಿನ ಪಯಣ, ಒಂದೊಮ್ಮೆ ಆಲಿಸು ನನ್ನಯ ಹುಚ್ಚುಗವನ... ಹೀಗೂ ಇರಬಹುದೆ ಪ್ರೀತಿಯ ಯಾನ?? ಸದ್ಯಕ್ಕೆ ಕಲ್ಪನೆಯಲ್ಲೇ ಇದು ಚೆನ್ನ!! ಹೀಗೆ ಕುಳಿತುಬಿಡಲೇ ಕಲ್ಪಿಸುತಲೇ ಎಲ್ಲವನ್ನ?? ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ರೆಕ್ಕೆ ಬಡಿಯುತ್ತಿದೆ ಮನಸ್ಸು..!

Image

ನನ್ನವ್ವ.!

Image
ನನ್ನವ್ವ.! *********************************** ಕ ಣ್ಣಲ್ಲಿ ಕಣ್ಣಿರಿಸಿ ನನ್ನನ್ನು ಕಾಯ್ವವಳು ... ತುತ್ತಲ್ಲಿ ಮುತ್ತಿರಿಸಿ ಹಸಿವನ್ನು ಕಳೆವವಳು... ತುಸು ಕೋಪ ತೋರಿ ಕಣ್ಣಲ್ಲೇ ಬೈಯ್ವವಳು... ಮರುಕ್ಷಣವೇ ಮುದ್ದಾಡಿ  ಹುಸಿ ಮಾಡಿ ನಗಿಸುವಳು...  ಪ್ರೀತಿಗೆ ಮುನ್ನುಡಿಯ ಬರೆದವಳಿವಳು... ನೂರು ಸಾಲು ಗೀಚಿದರೂ ಬೆಲೆ ಕಟ್ಟದಂತಿರುವ ನನ್ನುಸಿರಿವಳು!! "ನನ್ನವ್ವ"... "ನನ್ನವ್ವ"... ✍️ಮೇಘ  ಬೆಂಗಳೂರು . ************************************ #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743

ಮಂಕಾದ ಮನಸ್ಸು...!

Image
  ಮಂಕಾದ ಮನಸ್ಸು....! ********************************** ಕ ತ್ತಲು ಕವಿದಂತೆ ಕರಿಮೋಡ  ಮನಸೇರಿದೆ, ಬೆತ್ತಲು ಭೂವಿಯಂತೆ ಎತ್ತ ನೋಡಿದರು ದಾರಿ ಕಾಣದಾಗಿದೆ, ಇದ ಯೋಚಿಸುತ್ತ ಯೋಚಿಸುತ್ತ ಮೌನಕ್ಕೆ ಜಾರಿ ಮoಕಾಗಿದೆ ಮನಸ್ಸು ..! ಸುತ್ತಲು ಬರಿ ಕೊಳಕೇ ತುಂಬಿರುವ ಕಾಲುವೆಯಂತೆ, ಹಣದ  ದಾಹ ತೀರಲು ನಿಂತ  ನರಬಕ್ಷಕರಂತೆ ಕಾದಿರುವ ಜಗತ್ತಿನ ನಡು ಸಿಲುಕಿ ಕೊರಗುತ್ತ ಕೊರಗುತ್ತ ಮoಕಾಗಿದೆ ಮನಸ್ಸು,,! ಸಾಗರದೆತ್ತರಕ್ಕೆ  ಹಾರಿದ ರಣ ಹದ್ದಿನಂತೆ,, ಸಮುದ್ರದಾಳಕ್ಕೆ ಈಜಿದ ತಿಮಿಂಗಳದಂತೆ,, ಬಲು ದೂರಕ್ಕೆ ಚಿಂತಿಸಿ,,, ಭವಿಷ್ಯವ ಚಿತ್ರಿಸಿ,, ಆಸೆಯ ಉತ್ತುಂಗಕ್ಕೆ ಹೇರಿಸಿ ಕನಸ, ದಾರಿ  ಕಾಣದೆ, ನಡುರಸ್ತೆಯಲ್ಲಿ ನಡುಗುತ್ತ,, ನಡುಗುತ್ತ, ಮoಕಾಗಿದೆ ಮನಸ್ಸು ಮನಸ್ಸು...! ! ✍️ಕೀ.ಕೆ ಬೆಂಗಳೂರು. ************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743