Posts

Showing posts with the label Kannada poems

ಮಗ್ಗಲು ಮಾರಿ..!

Image
  ಮಗ್ಗಲು ಮಾರಿ..! Credit:- pinterest.com ©All Rights reserved by  Myunsungpoetry.blogspot.com Ref no :- MUP/01012023/29 ************************************** ಮ ಗ್ಗಲು ಮಾರಿ ನರವ್ಯೂಹದೊಳು ಸೇರಿ, ಗದ್ದಲಕೊಳಮಾಡಿದೆ ನೂರು-ಬಾರಿ, ಕಾಣದ ತೀರಕ್ಕೆ ಕರೆಯೋಲೆ ತೋರಿ, ನಮ್ಮೆಲ್ಲರ ತಲೆಯೋಳು ತೂರಿ-ತೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಯುವಜನತೆ ತೋರದೆ ದಾರಿ, ಬಿದ್ದಿಹರು ಅಂತರ್ಜಾಲದೊಳು ಕಾಲುಜಾರಿ..! ಬೆನ್ನತ್ತ ಬೇತಾಳದಂತೆ ಹೆಗಲ ಮೇಲೇರಿ, ಸಂಬಂಧ ಬರಿದುಮಾಡಿದ ಕ್ರೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಆಲದ ಮರದಂತೆ ಕೈಯೋಳು ಬೇರೂರಿ, ಅರಿದು ಮೋರಿಸೇರುತ್ತಿದೆ ಸೃಜನತೆ ಸೋರಿ, ಹೊರಟಿದೆ ಕಾಲ್ಪನಿಕ ಲೋಕದೋಳು ಮನಸನು ಮಾರಿ, ಮಾನವನೇ,,, ನೀ ಸೃಷ್ಟಿಸಿದ ಹೆಮ್ಮಾರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ನೀ ಮುಡಿದ ಮಲ್ಲಿಗೆ..!

Image
  ನೀ ಮುಡಿದ ಮಲ್ಲಿಗೆ..! ©All Rights reserved by  Myunsungpoetry.blogspot.com Ref no :- MUP/24122022/28 *************************************** ಬೋ ರ್ಗರೆವ ಆ ತೀರದ ಕಡೆಗೆ, ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ, ಏಕಾಂತದಿ ಚಂದಿರನಿರುವ ಮುಗಿಲಿಗೆ, ನಿನ್ನ ಕರೆದೋಗುವಾಸೆ ಈ ಮನಸಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ಒಂಟಿತನದಿ ಮುಳಿಗಿದ್ದೀ ಬಾಳಿಗೆ, ಜೊತೆಯಾಗುವೆಯೆಂದು ಈ ತೊಳಿಗೆ, ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ, ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ, ನೀ ನುಡಿದ ಪದಗಳೆ ಮೆಟ್ಟಿಲುಗಳು ಈ  ಸಾಲಿಗೆ, ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ, ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ, ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..? ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಓ ಮನದ ರಾಜನೇ..!

Image
ಓ ಮನದ ರಾಜನೇ..! ©All Rights reserved by  Myunsungpoetry.blogspot.com Ref no :- MUP/08122022/27 **************************************** ಮೆ ಲ್ಲನೆ ಸೂರ್ಯ ಮರೆಯಾಗಿರಲು ಹರುಷದಲ್ಲಿ ಚಂದ್ರ ತೇಲಿ ಬರುತಿರಲು ನಿನ್ನ ನೆನಪು ಮನದಲ್ಲಿ ಮಂದಹಾಸ ತಂದಿರಲು  ನಿನ್ನನ್ನು ಹೃದಯದ ಗೋಪುರದಲ್ಲಿ ಪೂಜಿಸಿ ಆರಾಧಿಸುತ್ತಿರುವೆ  ನಲ್ಮೆಯ ನಲ್ಲನೆ  ಕಾಡುತಿರುವೆ ನೀ ಏಕೆ ಕನಸಲೇ ಬಂದು  ಈ ಕಣ್ಣುಗಳಿಗೆ ದರುಶನ ನೀಡುವೆಯ ಪ್ರೀತಿಯ ದಾರಿ ತೋರುವೆಯಾ ಈ ಒಂಟಿತನದ ಪಯಣಕ್ಕೆ  ಸಾಗುವೆ ಜೊತೆ ಜೊತೆಯಲ್ಲೇ ಓ ಮನದ ರಾಜನೇ ನಿಷ್ಕಲ್ಮಶ ಮನಸ್ಸಿನ ಒಡೆಯನೇ  ಕನಸಲೇ ಬಂದು ಕನಸಲ್ಲೇ ಆಗುವೆ ಮಾಯ ಹೇ ಪ್ರಿಯ ಸಖನೇ  ಜೀವ ತುಂಬುವೆಯ  ಈ ಕಲ್ಪನೆಯ ಪ್ರೀತಿಗೆ  ನಗುತಲೆ ಕೇಳುವೆ ನಾ ನೀ ಯಾರೆಂದು ತಿಳಿಸುವೆಯಾ ? ನನ್ನೀ ಮುಗ್ದ ಮನಸ್ಸಿಗೆ ಒಮ್ಮೆ ತಿಳಿಸಿದರೆ  ನೀ ಬರುವ ದಾರಿಯಲ್ಲಿ  ಪ್ರೀತಿಯ ಹೂಗಳ ಚೆಲ್ಲಿ  ಸ್ವಾಗತಿಸುವೆ ನನ್ನೀ ಹೃದಯದ ಅರಮನೆಗೆ....🥰 Anu ....✍🏻❣️ Bengaluru. **************************************** I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 #Myunsungpoetry.blogspot.com# 𝙸?...

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

Image
ಮಾಯದಲ್ಲಿ ಮಾಸುಹೋಗಿದೆ ಮನಸ್ಸು ©All Rights reserved by  Myunsungpoetry.blogspot.com Ref no :- MUP/30112022/26 *************************************** ಬಾ ಣದಂತ ಸಮಯದ ನಡು ಸಿಲುಕಿ.. ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ.. ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಕಟಿಕರ ಕುಟೀರದಲ್ಲಿ ಸೇರಿ.. ಕಾಮಕ್ರೋಧದ ಬಲೆಯಲ್ಲಿ ತೂರಿ.. ಮೂಢನಂಬಿಕೆಯ ಜಾಲದಲ್ಲಿ ಜಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ.. ಪ್ರೇಮಲೋಕವ ದಿನವು ನೆನೆದು ನೂರು ಬಾರಿ.. ಮರೆತು ತನ್ನ ಜೀವನದ ಸಾಧನೆಯ ದಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಆದರೂ ಎಲ್ಲೋ.......... ಭರವಸೆಯ ಕಿರಣ ಮನಸಲಿ ತೂರಿ.. ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ.. ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ.. ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!. ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 ...

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....

Image
ಮರಳಿಬಾರದ.....     ಮನ ಅಳಿಸದ   ಸುಂದರ ಸವಿ ನೆನಪುಗಳು.... **************************************** ©All Rights reserved by  Myunsungpoetry.blogspot.com Ref no :- MUP/09082022/19 **************************************** ಹು ಣ್ಣಿಮೆಯ ರಾತ್ರಿಯಲಿ  ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ  ಮನಃಶಾಂತಿ ತುಂಬಿದ ಹೃದಯ  ವೇದನೆ ಅರಿಯದ ಚಿತ್ತ  ತೊದಲ ನುಡಿಗಳು  ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ  ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು..... ಅಮ್ಮನು ಆಡಿದ ಜೋಗುಳ  ಅಪ್ಪನ ಹೆಗಲೇರಿದ ಆ ದಿನಗಳ ಬಾನಿನಲ್ಲಿ ಚಂದಮಾಮನ ಕಂಡು ಸವಿ ಮಾತಿಗಾಗಿ ಕಾತುರ  ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ  ತಾರೆಗಳ ಎಣಿಸುವ ಸಡಗರ ಎಣಿಸಲಾಗದೆ ಓಡಿ ಸರಸರ  ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ  ಗಾನದಂತೆ ಇಂದಿಗೂ ಸುಮಧುರ  ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು..... ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ  ನೆನಪಲ್ಲೇ ನೆನಪನ್ನು ಮುದ್ದಿಸಿ ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು  ಮರಳಿಬಾರದ,,, ಮನ ಅಳಿಸದ,, ಸುಂದರ ಸವಿ ನೆನಪುಗಳು  ಮಂದಹಾಸ ಹ...

ನೆಚ್ಚಿನ ಗುರು

Image
  ನೆಚ್ಚಿನ ಗುರು **************************************** ಅ ರಿವೇ ಗುರುವೆನ್ನುವರು ಗುರುವಿಲ್ಲದೆ ಅರಿವು ಸಾಧ್ಯವೇ? ನನ್ನ ನೆಚ್ಚಿನ ಗುರುವು ದೈವವೇ ಸರಿ  ಅದಕ್ಕೆ ಇರಬೇಕು ನೋಡಿದೊಡನೆ ವಿನಮ್ರಳಾಗಿ ನಿಲ್ಲುವೆ! ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದೊಯ್ಯುವ ಗುರುವೆ ನನ್ನ ಅರಿವು! ಚಿರವಾಗಲಿ ನನ್ನ ಗುರುವಿನ ಕಾಯಕ  ಅಪೇಕ್ಷೆಯಿಲ್ಲದ ನಿಸ್ವಾರ್ಥ ಪಾಠವು! ಕಾಣಸಿಗುವುದೇ ಹುಲು ಮಾನವನಿಗೆ ತ್ರಿಮೂರ್ತಿಗಳ ದರ್ಶನ! ಹೀಗಾಗಿಯೇ ಹೇಳಿರಬೇಕು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಹ!  ಗುರುವಿಗೆ ಗುಲಾಮನಾಗುವವರೆಗೂ ಸಿಗಲಾರದಯ್ಯ ಮುಕುತಿ! ಎಂದಿಗೂ ಶಾಶ್ವತ ನಿನ್ನ ಮೇಲಿನ ಭಕುತಿ ಜ್ಞಾನದ ಕಣಜವೇ ನೀನು ನನ್ನಯ ಪಾಲಿಗೆ ನೀನೆ ಕಾಮಧೇನು!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಅತೃಪ್ತ ಅಬಲೆಯ ಜೀವನ..!

Image
  ಅತೃಪ್ತ ಅಬಲೆಯ ಜೀವನ..! ****************************************** ಅ ರಿಯದ ವಯಸಲಿ ಮದುವೆಯ ದಿಬ್ಬಣ... ಬಹುಬೇಗ  ಬಂದಿತೆ     ನೋವಿನ ಕಂಕಣ ... ಕನಸೇ ಇಲ್ಲದ ನಿನ್ನ ಬರಿದಾದ ಜೀವನ... ಹುಸಿಯಾಯಿತು ನಿನ್ನ ಹಸಿರಿನ ಪಯಣ!!! ಹಗಲಿರುಳು ದುಡಿವೆ ನೀ  ಮನೆಯಾಕಿಯಂತೆ.... ಹೆಸರಿಗಷ್ಟೇ ಒಡತಿ, ಉಳಿಯುದೇನಿಲ್ಲ ಮತ್ತೆ... ಸಿಲುಕಿರುವೆ ನೀ ಬಂಧನಗಳ ಜೊತೆ... ಉಳಿಯುದಾದರೊಂದೆ ಅದುವೆ ಚಿಂತೆ!!! ಹಿಂದೆಂದೂ ಕಂಡಿರದ ಹಿಂಸಿಸುವ ಜನಗಳನೊಳಗೂಡಿ... ಸೋಲುವೆ ನೀನು ಸಮಸ್ಯೆಗಳ ಬಡಿದಾಡಿ... ನಿಲ್ಲದು ಈ ನಿನ್ನ ಒಬ್ಬಂಟಿಯ ಗಾಡಿ... ನಿನ್ನವರಂತಿದ್ದರೂ ನಿನ್ನವರಲ್ಲ ನೀನೆ ಹೊರಬೇಕು ಬಾಳಿನ ಬಂಡಿ!!! ಮುಗಿಯದು ನಿನ್ನ ಕಷ್ಟಗಳ ಪಯಣ... ಬರುವವರೆಗೂ ಮುಕ್ತಿಯ ಆಗಮನ... ಅನಿಸಿರಬೇಕು ನಿನದು ಅತೃಪ್ತ ಜೀವನ... ಇರಬಹುದು ಇದಕ್ಕೆಲ್ಲಾ ವಿಧಿಯೇ ಕಾರಣ!!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮನ ಬರಡಾಗಿ ಬೆತ್ತಲಾಗಿದೆ.!

Image
  ಮನ ಬರಡಾಗಿ ಬೆತ್ತಲಾಗಿದೆ.! * ***************************************** ಭಾ ವನೆಗಳ ಜೊತೆಗೂಡಿ.. ಪ್ರಕೃತಿಯೊಡನೆ ನಲಿದಾಡಿ.. ಚಂದಿರನೊಡನೆ ಮುದ್ದಾಡಿ ನೂರಾರು ಪದಗಳ ಕುಡಿ-ಕುಡಿ ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ...! ಸುರಿವ ಮಳೆಯೊಡನೆ ಕುಣಿದಾಡಿ.. ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ.. ತೀರದ ಸಮುದ್ರದಲೆಯಲಿ ತೆಲಾಡಿ.. ಪದಗಳಲೆ ಸರಸವಾಡುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ..! ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ.. ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ.. ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ... ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ.. ಬರಡಾಗಿ ಬೆತ್ತಲಾಗಿದೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಉತ್ತರ ಸಿಗದ ಬದುಕು..!

Image
ಉತ್ತರ ಸಿಗದ ಬದುಕು..! **************************************** ಕ ತ್ತಲೆ ತುಂಬಿದ ಬದುಕಲ್ಲಿ  ಪ್ರಶ್ನೆಗಳ ಸುರಿಮಳೆ ಮನದಲ್ಲಿ  ದಾರಿ ಕಾಣದೆ ಅಲ್ಲಲ್ಲಿ  ತಡವರಿಸಿ ಬೆಳಕನು ಹುಡುಕುತ  ಕರಿಗತ್ತಲಲ್ಲಿ   ದೂರದ ತಟದಲ್ಲಿ  ನಂದಾದೀಪವು ಕಾಣಲು  ಮನ ಸಂತೋಷದಿಂದಿರಲು..! ತುಸು ಬೀಸಿ ಬಂದ ಪಿಸುತಂಗಾಳಿ ಆವರಿಸಿರಲು  ಮನ ಭಯದಿ ತುಂಬಿರಲು ಮನ ಕೂಗಿ ಕರೆದರೂ  ಕಂಡು ಕಾಣದೆ  ತಣ್ಣನೆ ಬೀಸಿ ದೀಪವ ನಂದಿಸಿರಲು  ಮರು ಮಾತಾಡದೆ ಮಾಯವಾಯಿತು ಬೆಳಕ ಕಾಣದೆ ಮನ ನಿಂತಲ್ಲೇ ಮಂದವಾಯಿತು... ಮನದಿ ಉತ್ತರವೇ ಸಿಗದಂತಾಯಿತು..!       Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಸ್ನೇಹ ಸಂಕೋಲೆ.!

Image
ಸ್ನೇಹ ಸಂಕೋಲೆ.! ******************************************** ದೂ ರವಿದ್ದರು ನೀ ಮನದಲ್ಲಿ ಕೂತಿರುವೆ...  ಅಪರಿಚಿತರನ್ನು ಸನಿಹ ಬಿಡದೆ ಸ್ನೇಹ ಸ್ವಾರ್ಥಿಯಾಗಿರುವೆ... ಖುಷಿಯಲ್ಲಿ ಮಗುವಾಗಿ ಭುಜಕ್ಕೊರಗಿ, ದುಃಖಕ್ಕೆ ಅಪ್ಪುಗೆಯ ಸಾಂತ್ವಾನವಿರಿಸಿ, ಸ್ನೇಹದ ಆಕಾಂಕ್ಷೆಯಾಗಿರುವೆ... ಅಗಲಿರಲಾರೆ ನಿನ್ನ ನಾ ಗೆಳತಿ... ನಗುವ ಮುಖ ತೋರಿ ಮಗುವಾಗಿಸು ನಿನ್ನ ಮಡಿಲಲ್ಲಿ ಒಂದು ಸರತಿ... ಎಂದಿಗೂ ಸ್ನೇಹದ ಚಿಲುಮೆಯಾಗಿರು ನನ್ನೊಡತಿ... ಕೋಪ ಕೊಂಚ ಹಿಡಿದು, ಖುಷಿಯ ಹೂಗುಚ್ಚ ಮುಡಿದು, ಬಾಡದಿರು ನೀ ನನ್ನ ಮುದ್ದು ಕೋತಿ!!! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಕಳೆದ ದಿನಗಳ ನೆನೆದು..!!

Image
  ಕಳೆದ ದಿನಗಳ ನೆನೆದು ************************************** ** ಮ ರುಕಳಿಸದ ಸಂತೋಷದ ದಿನಗಳ ನೆನೆದು  ಮನ ದುಃಖದ ದಿನವ ಮರೆತಿದೆ ಇಂದು  ಕಂಬನಿ ಕಣ್ಣಲ್ಲೇ ಮಾಯವಾಗಿ  ತುಸು ನಗುತಿರಲು  ಅಂದು ಬೇರೊಂದು ಮನ ಸಂತೈಸಿದ ದಿನವ ನೆನೆದು  ಮತ್ತೆ ಕಣ್ಗಳು ತುಂಬಿರಲು  ದೂರಾದ ಮನವೇಕೆ ಮನವೇ  ಕೂಗಿ ಕರೆದರೂ ಕನಸಲೂ ಹಿಂದಿರುಗದ ಮನವ ನೆನೆದು  ಮನಕೆ ಮನವೇ ಸಂತೈಸಿರಲು  ಕಳೆದ ದಿನಗಳ ನೆನೆದು ಸಂತಸದಿಂದಿರು  ಲೋಕವೇ ಎದುರಾದರು  ಯಾರೇ ದೂರಾದರು  ಮನಕೆ ಮನವೇ ನೀ ಮರೆಯದಿರು..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  974310474 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಆಲಿಸು ನನ್ನಯ ಹುಚ್ಚುಗವನ...!

Image
ಆಲಿಸು ನನ್ನಯ ಹುಚ್ಚುಗವನ... ******************************************** ಪ್ರೀತಿ ಎಂದೊಡನೆ ನೆನೆಯುವೆ ನಿನ್ನ, ನೆನೆದೊಡನೆ ಮನಕೆ ಖುಷಿಯ ದಿಬ್ಬಣ... ಅರಿಯದೆ ಜಪಿಸುವೆ  ನಿನ್ನ ಹೆಸರನ್ನ, ಆ ಕನವರಿಕೆಗೆ ಕೊಡು ಒಂದು ವ್ಯಾಖ್ಯಾನ... ನಿನ್ನ ನೋಡಲು ನಾಚುವವು ನಯನ, ಉಳಿಯಲು ಸಾಧ್ಯವೇ ಇರದೆ ನಿನ್ನೆಡೆಗೆ ಗಮನ... ಊಹೆಗು ಮೀರಿದೆ ನನ್ನ ಕನಸಿನ ಪಯಣ, ಒಂದೊಮ್ಮೆ ಆಲಿಸು ನನ್ನಯ ಹುಚ್ಚುಗವನ... ಹೀಗೂ ಇರಬಹುದೆ ಪ್ರೀತಿಯ ಯಾನ?? ಸದ್ಯಕ್ಕೆ ಕಲ್ಪನೆಯಲ್ಲೇ ಇದು ಚೆನ್ನ!! ಹೀಗೆ ಕುಳಿತುಬಿಡಲೇ ಕಲ್ಪಿಸುತಲೇ ಎಲ್ಲವನ್ನ?? ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ರೆಕ್ಕೆ ಬಡಿಯುತ್ತಿದೆ ಮನಸ್ಸು..!

Image

ಓ ನನ್ನ ಸೂರ್ಯ..!

Image
ಓ ನನ್ನ ಸೂರ್ಯ..! ************************************* ಮು ಸುಕು ಕವಿದಿರುವ ಮನಕೆ ನೀ ಬಂದೆ ಬೆಳಕಾಗಿ, ಹೊಳೆವ ನಿನ್ನಂದಕೆ ಬೆರಗಾದೆ ತಲೆಬಾಗಿ.. ಸುಡುವ ಶಾಖಕೆ ಅಂಜಿ ತುಸು ನಿನ್ನ ತೆಗಳುತ್ತ.. ತೆಗಳುತ್ತ..! ಆದರೆ ನೀ ಹಿಂತಿರುಗುವ ಮುಸ್ಸಂಜೆಯಲಿ ಕಂಡು ಆ ನಿನ್ನಂದ-ಚಂದ, ಕಳೆದೆ ಕಾಲವ,, ಗಳಿಸುತ ಖುಷಿಯ ಆಲಿಸುತ-ಆಲಿಸುತ ಹಕ್ಕಿಗಳ  ಘಾನವ, ನಿನ್ನ ಹೊಗಳುತ್ತ..ಹೋಗಳುತ್ತ..! ನಿನ್ನ ತೇಜಸ್ಸನ್ನು ಹೋಲುವರಾರಿಲ್ಲ ಜಗದಲ್ಲಿ, ನಿನ್ನ ಮುಂದೆ ತೃಣ ಮಾತ್ರ ನಾವಿಲ್ಲಿ...! ಸಕಲ ಜೀವ ಜಂತುಗಳಿಗೆ ನೀನೆ ಆಶ್ರಯ, ನಿನ್ನ ವಿಸ್ಮಯಕ್ಕೆ ಶರಣಾದೆ ಓ ನನ್ನ ಸೂರ್ಯ.. ಸೂರ್ಯ..! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743

ನನ್ನವ್ವ.!

Image
ನನ್ನವ್ವ.! *********************************** ಕ ಣ್ಣಲ್ಲಿ ಕಣ್ಣಿರಿಸಿ ನನ್ನನ್ನು ಕಾಯ್ವವಳು ... ತುತ್ತಲ್ಲಿ ಮುತ್ತಿರಿಸಿ ಹಸಿವನ್ನು ಕಳೆವವಳು... ತುಸು ಕೋಪ ತೋರಿ ಕಣ್ಣಲ್ಲೇ ಬೈಯ್ವವಳು... ಮರುಕ್ಷಣವೇ ಮುದ್ದಾಡಿ  ಹುಸಿ ಮಾಡಿ ನಗಿಸುವಳು...  ಪ್ರೀತಿಗೆ ಮುನ್ನುಡಿಯ ಬರೆದವಳಿವಳು... ನೂರು ಸಾಲು ಗೀಚಿದರೂ ಬೆಲೆ ಕಟ್ಟದಂತಿರುವ ನನ್ನುಸಿರಿವಳು!! "ನನ್ನವ್ವ"... "ನನ್ನವ್ವ"... ✍️ಮೇಘ  ಬೆಂಗಳೂರು . ************************************ #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743